
ನಿಜವಾದ ಸಾಪೇಕ್ಷದಲ್ಲಿ
ಸುಳ್ಳೆಲ್ಲವೂ
ಸತ್ಯ
ನಿರಪೇಕ್ಷ ಗೆದ್ದರೂ
ಸಾಪೇಕ್ಷಕ್ಕೇ ಜಯ
ಏಕೆಂದರೆ ನಿರಪೇಕ್ಷ
ಗೆದ್ದಿರುವುದೂ
ಸಾಪೇಕ್ಷತೆಯಲ್ಲೇ..
ಗೀತಾಚಾರ್ಯ ಹೇಳಿದ್ದೂ ಅದನ್ನೇ.
ಅಪ್ರಿಯವಾದ
ಸತ್ಯವೆಲ್ಲಾ
ಸುಳ್ಳು
ಬಹುಜನ ಪ್ರಿಯ ಸುಳ್ಳಿನಲ್ಲೇ
ಸತ್ಯದ ಜನನ
***
ಬೆಳಗ್ಗೆ ಬಂದ ಮಿಥ್ಯ
ಕರೆಯೊಂದಕ್ಕೆ
ಮರುಳಾಗಿ
ಕುರಿಯಾಗುವುದು
ಸುಳ್ಳಲ್ಲ.
ಆ ಮಿಥ್ಯಕ್ಕೆ ಹಚ್ಚಿದ ಬಣ್ಣ
ಕದಡುವವರೆಗೂ
ಸುಳ್ಳೂ ಸತ್ಯವೇ..
ಕದಡಿದ ನಂತರ
ಓಕುಳಿ.
***
ಕರೆ ಮಾಡಿ ಕುರಿಮಾಡಿದವನ
ಮಿಥ್ಯ ಸಂತೋಷಕ್ಕಿಂತ
ಕುರಿಯಾದವನ
ಬಣ್ಣಗಳೇ
ಹೆಚ್ಚು
ವರ್ಣಮಯ
ಕುರಿಮಾಡಿದವನ
ಕ್ಷಮೆಯಾಚನೆಗಿಂತ
ಆ ದಿನದ
ಸತ್ಯವಾದ
ಮಿಥ್ಯ ಸಂಭ್ರಮದ
ಕುರಿತಾಗಿ
ಕುರಿಯಾದವ
ಅರ್ಪಿಸಿದ ಧನ್ಯವಾದಕ್ಕೇ ಹೆಚ್ಚು
ಬೆಲೆ.
ಸುಳ್ಳೆಲ್ಲವೂ
ಸತ್ಯ
ನಿರಪೇಕ್ಷ ಗೆದ್ದರೂ
ಸಾಪೇಕ್ಷಕ್ಕೇ ಜಯ
ಏಕೆಂದರೆ ನಿರಪೇಕ್ಷ
ಗೆದ್ದಿರುವುದೂ
ಸಾಪೇಕ್ಷತೆಯಲ್ಲೇ..
ಗೀತಾಚಾರ್ಯ ಹೇಳಿದ್ದೂ ಅದನ್ನೇ.
ಅಪ್ರಿಯವಾದ
ಸತ್ಯವೆಲ್ಲಾ
ಸುಳ್ಳು
ಬಹುಜನ ಪ್ರಿಯ ಸುಳ್ಳಿನಲ್ಲೇ
ಸತ್ಯದ ಜನನ
***
ಬೆಳಗ್ಗೆ ಬಂದ ಮಿಥ್ಯ
ಕರೆಯೊಂದಕ್ಕೆ
ಮರುಳಾಗಿ
ಕುರಿಯಾಗುವುದು
ಸುಳ್ಳಲ್ಲ.
ಆ ಮಿಥ್ಯಕ್ಕೆ ಹಚ್ಚಿದ ಬಣ್ಣ
ಕದಡುವವರೆಗೂ
ಸುಳ್ಳೂ ಸತ್ಯವೇ..
ಕದಡಿದ ನಂತರ
ಓಕುಳಿ.
***
ಕರೆ ಮಾಡಿ ಕುರಿಮಾಡಿದವನ
ಮಿಥ್ಯ ಸಂತೋಷಕ್ಕಿಂತ
ಕುರಿಯಾದವನ
ಬಣ್ಣಗಳೇ
ಹೆಚ್ಚು
ವರ್ಣಮಯ
ಕುರಿಮಾಡಿದವನ
ಕ್ಷಮೆಯಾಚನೆಗಿಂತ
ಆ ದಿನದ
ಸತ್ಯವಾದ
ಮಿಥ್ಯ ಸಂಭ್ರಮದ
ಕುರಿತಾಗಿ
ಕುರಿಯಾದವ
ಅರ್ಪಿಸಿದ ಧನ್ಯವಾದಕ್ಕೇ ಹೆಚ್ಚು
ಬೆಲೆ.
3 comments:
sakkathagide maga...
super :)
kannada tongue twisters chennaagi barithiya kano...
Post a Comment