Monday, November 24, 2008

ಪುಸ್ತಕಾನ್ವೇಷಣೆ ..

ನಿನ್ನೆ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪುಸ್ತಕ ಪ್ರದರ್ಶನಕ್ಕೆ ಹೋದಾಗ ಒಂದ್ನಾಲ್ಕು ಪುಸ್ತಕ ತಂದೆ ..ತಂದಿದ್ದು ನಾನಾದರೂನಿಮಗೂ ಹೇಳ ಬೇಕು ಅನಿಸಿತು ಅದಕ್ಕೆ ಬರಿತಾ ಇದೀನಿ.. ಮೊದಲು ಪುಸ್ತಕಗಳ ಆಯ್ಕೆಗೆ ಹೋದಾಗ ನನಗೆ ಕಂಡಿದ್ದು 'ನೇಮಿಚಂದ್ರ ರವರ ಸಂಪೂರ್ಣ ಕಥೆಗಳು..'.. ಹಳದಿ ಬಣ್ಣದ ಕವರಿಗೆ ಶ್ರೀಪಾದರ ವಿನ್ಯಾಸವಿತ್ತು..ನೋಡಿದ ತಕ್ಷಣ ಮನಸಲ್ಲೇ ಒಪ್ಪಿಕೊಂಡೆ.. ಸರಿ ಸುಮಾರು ಮುನ್ನೂರು ಮಳಿಗೆಗಳಲ್ಲಿ ಪುಸ್ತಕ ಹುಡುಕಲು ಸಾಕಷ್ಟು ಕಷ್ಟವೇ ಆಯಿತು.. ನಮ್ಮ ಜಿಲ್ಲೆಯ ಶ್ರೀಧರ ಬಳೆಗಾರ ಅವರ 'ಒಂದು ಫೋಟೋದ ನೆಗೆಟಿವ್..' ಮನಸೆಳೆದ ಇನ್ನೊಂದು ಪುಸ್ತಕ..ಅಪಾರ ಅವರ ರೇಖಾಚಿತ್ರ ಮುಖಪುಟವನ್ನಲಂಕರಿತ್ತು .. ಅದನ್ನೂ ಬಿಡಲಿಲ್ಲಾ... ನನ್ನ ಜೊತೆ ಬಂದ ವಿಶಾಖ ಸಿ.ಡಿ.ಗಳನ್ನು ಹುಡುಕಿಹುಡುಕಿ ಸಾಕಾದ.. ನಾನೂ ಸಣ್ಣಕಥೆಗಳ ಪುಸ್ತಕ ಹುಡುಕುತ್ತಾ ಹುಡುಕುತ್ತಾ ಸಾಗುತ್ತಿದ್ದೆ... ದಿವಾಕರ್ ಅವರು ಸಂಗ್ರಹಿಸಿದ 'ಕನ್ನಡದಸಣ್ಣ ಕಥೆಗಳು' ನನ್ನ ಬ್ಯಾಗಿಗೆ ಬಿತ್ತು .. ಮರಳುವಾಗ ಅಚಾನಕ್ಕಾಗಿ ಸಿಕ್ಕಿ ಬಿದ್ದಿದ್ದು.. ಬೆಳಗೆರೆಯವರ 'ನಿ ಹಿಂಗ ನೋಡಬ್ಯಾಡ ನನ್ನ..' ಅವರ ಹೇಳಿ ಹೋಗು ಕಾರಣ ಓದಿ ಪ್ರಭಾವಿತನಾಗಿದ್ದ ನಾನು ಇದನ್ನೂ ಎತ್ತಿಕೊಂಡೆ.. ವಿಶಾಖ ಕೆಲವು ಸಿ.ಡಿ.ಗಳ ಜೊತೆಗೆವಕ್ರತುಂಡೋಕ್ತಿಗಳು' ಪುಸ್ತಕವನ್ನು ಚೀಲಕ್ಕೆರಿಸ್ದ .. ನಾಲ್ಕೂ ಪುಸ್ತಕಗಳು ಈಗ ಶೆಲ್ಫಿನಲ್ಲಿ ಕುಳಿತು ನಿದ್ರಿಸುತ್ತಿವೆ.. ಪರೀಕ್ಷೆ ಹತ್ತಿರಬರುತ್ತಿದ್ದುದರಿಂದ ಒದಲಾಕ್ತಾ ಇಲ್ಲ .. ಮಲಗಬೇಕಾದರೆ ಜೊತೆ ಕೊಡಲು ಮಯೂರವಿದೆ.. ಮಯೂರದಲ್ಲಿ ಸಚ್ಸಿದಾನಂದ ಹೆಗಡೆಯವರ ಅನ್ವೇಷಣೆ ಕಥೆ ಓದಿದೆ.. ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.... ಈಗ ಇಷ್ಟು ಸಾಕು..