Tuesday, December 30, 2008

ಕಾರ್ವರ್ ಬರೆದ "ಕ್ಯಾಥೆಡ್ರಲ್"

ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ.ಇವರ ಕಥೆಯೊಂದನ್ನು ಕನ್ನಡಕ್ಕಿಳಿಸಿದ್ದಾರೆ.. ಗುರುಬಾಳಿಗ...

ಕಥೆಯನ್ನು ಒಮ್ಮೆ ಓದಿದಾಗ ಕೆಳಗಿನ ವಾಕ್ಯಗಳು ವಿಚಿತ್ರ ಸತ್ಯವೊಂದರ ತಡಕಾಟದಲ್ಲಿದ್ದಂತೆ ಭಾಸವಾಗಿದ್ದು ನನಗೆ...



"ಅದರಲ್ಲಿ ಒಬ್ಬ ಸೈನಿಕನ ಹೆಂಡತಿಯಾಗಿ ಇರುವುದು ಅಂದರೇನು ಎಂಬ ಭಾವ ಇರುವುದು ಎಲ್ಲ ಹೇಳಿದ್ದಳಂತೆ. ಬಹುಶ ಆ ಕವನವನ್ನು ಅವಳು ಪೂರ್ತಿಯೇ ಮಾಡಿಲ್ಲ.."

ಮೊದಲು ಇಷ್ಟ ಎಂದು ಒಂದಾದವರೇ ಇಷ್ಟವಿಲ್ಲದಂತಾದಾಗ ಸಂಬಂಧಗಳು ಅರ್ಥ ಕಳೆದುಕೊಂಡಿರುತ್ತವೆ.. ಮನಸ್ಸಿನ ಅಂದಿನ ಭಾವನೆಗಳು ಕೊನೆಯವರೆಗೂ ಅರ್ಥವಾಗದೇ ಉಳಿದು ಹೋಗುತ್ತದೆ...



"ಇಷ್ಟೆಲ್ಲಾ ಅವನು ಮಾಡಿದರೂ ಒಬ್ಬ ಹೆಂಗಸಿನಂಥಾ ಹೆಂಗಸು ಹೇಗಿರುತ್ತಾಳೆ ಅಂತ ಅವನು ಕಾಣಲೇ ಇಲ್ಲವಲ್ಲ. "

ಸ್ತ್ರೀ ಯ ರಹಸ್ಯದ ಬಗ್ಗೆ ಕಾಳಿದಾಸನೂ ಇದೇ ಮಾತನ್ನು ಹೇಳುತ್ತಾನೆ.. ಎಷ್ಟೋ ಕವಿಗಳೂ ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ.. ಅದು ಕೇವಲ ಕುರುಡನೊಬ್ಬನಿಗಾಗಿ ಕಥೆಯಲ್ಲಿ ಪ್ರಸ್ತಾಪಿಸಿದರೂ ಒಳಾರ್ಥದಲ್ಲಿ ಎಲ್ಲರನ್ನೂ ಕುರಿತಾಗಿದೆ ಎಂದೆನಿಸಿತು..


"ಅವಳ ಕೊನೆಯ ಯೋಚನೆ ಇದೆ ಇರಬಹುದು, ತನ್ನ ಗಂಡನಿಗೆ ತಾನು ಹೇಗಿದ್ದೆನೆಂದೂ ತಿಳಿದಿಲ್ಲವಲ್ಲ ಅಂತ. ಪಾಪ."

ಈ ವಾಕ್ಯ ಗೊಂದಲವನ್ನುಂಟುಮಾಡಿತು.. ಹೆಂಗಸರ ಮನಸ್ಸು ಸೂಕ್ಷ್ಮವಾಗಿರುತ್ತದೆ.. ಅವರ ಭಾವುಕತೆ ಕೆವಲ ಮೂರ್ತ ರೂಪಕ್ಕೆ ಸೀಮಿತವಾದುವುದಲ್ಲ.. ಹೀಗಾಗಿ ಈ ವಾಕ್ಯದ ಅಗತ್ಯವಿರಲಿಲ್ಲ ಎಂದೆನಿಸುತ್ತದೆ.. ಲೇಖಕರು ಹೆಣ್ಣಿನ ಮನಸ್ಸಿಗೆ ನ್ಯಾಯ ಸಲ್ಲಿಸಿಲ್ಲ ಎಂದೆನಿಸುತ್ತದೆ..ತನ್ನನ್ನು ಒಳಗಣ್ಣಿನಿಂದ ಅರ್ಥಮಾಡಿಕೊಂಡರೆ ಸಾಕೆನಿಸಬೇಕಿತ್ತು.. ಬಹುಶ: ಆ ದೇಶದ ಸಂಸ್ಕೃತಿಗೆ ಇದು ಸರಿಹೋಗುವುದೇನೋ..


" ಸೇದಿ ಹೊರಕ್ಕೆ ಬಿಟ್ಟ ಹೊಗೆ ಲಯಲಯವಾಗಿ ಸಾಗುವ ಲಹರಿಯನ್ನು ಅವರು ನೋಡಲಾಗುವುದಿಲ್ಲವಲ್ಲ! ಅದಕ್ಕಿರಬಹುದು "

ವಾಕ್ಯದಲ್ಲಿ ಸಿಗರೇಟು ಸೇದುವವರು ಕೆವಲ ಹೊಗೆ ಹೊರಬರುವ ಚಂದ ನೋಡಲು ಮಾತ್ರ ಸೇದುತ್ತರೇನೋ? ನಾನಂತೂ ಸೇದಿಲ್ಲಪ್ಪಾ..


"ನನ್ನತ್ರ ಎರಡು ಟಿ.ವಿ. ಇದೆ. ಒಂದು ಕಲರ್ರು ಇನ್ನೊಂದು ಓಬಿರಾಯನ ಕಾಲದ ಬ್ಲಾಕ್ ಅಂಡ್ ವೈಟು."

ಈ ವಾಕ್ಯದಲ್ಲಿ ಹೆಳ ಹೊರಟಿರುವ ವಿಚಿತ್ರ ಅರ್ಥವಾಗಲಿಲ್ಲ.. ಕುರುಡನಿಗೇಕೆ ಎರಡು ಟಿ.ವಿ... ಅದೂ ಕಲರ್ ಮತ್ತೊಂದು ಬ್ಲಾಕ್ ಅಂಡ್ ವೈಟ್.. ನನಗನ್ನಿಸಿದ್ದು.. ಬಹುಶಃ ಕುರುಡನ ಆಶಾವಾದಕ್ಕೆ ಪೂರಕವಾಗಿ ಸೇರಿಸಿರಬಹುದು.. ಕುರುಡನಾದರೂ ಜೀವನವನ್ನು ಅತಿಯಾಗಿ ಪ್ರೀತಿಸುವಾಗ ಇಂತಹ ಅನವಶ್ಯಕ ವಿಚಾರಗಳಿಗೂ ಮನಸ್ಸು ವಿಶೇಷ ಪ್ರಾಮುಖ್ಯತೆ ಕೊಡುತ್ತದೆ...


"ನನಗೆ ಎಲ್ಲದರಲ್ಲೂ ಕಲಿಯಲು ದೊರೆಯುತ್ತೆ. ಲರ್ನಿಂಗ್ ನೆವರ್ ಎನ್ಡ್ಸ್ . ಈಗ ಕೂಡ ಏನಾದರೂ ಕಲಿಯಲು ಸಿಗಬಹುದು. ನಾನು ಕಿವಿಗೊಡುತ್ತೇನೆ"

ಇದು ಉತ್ತಮ ಪುರುಷನ ಲಕ್ಷಣಗಳಲ್ಲೊಂದು.. ಸದಾ ಕಲಿಯುವ ಹಂಬಲ..ಇತ್ಯಾದಿ ಬೇಗ ಅರ್ಥವಾಗುತ್ತದೆ..!!!


"ತಮ್ಮ ಇಡೀ ಬದುಕಿನ ಶ್ರಮವನ್ನು ಅದರಲ್ಲಿ ತೊಡಗಿಸಿ ಅವರ ಶ್ರಮದ ಫಲಿತಾಂಶ ಕಾಣಲು ಅವರು ಇರುವುದಿಲ್ಲ."

ಫಲಿತಾಂಶದ ನಿರೀಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸುವ ವ್ಯಕ್ತಿತ್ವದ ಜನರನ್ನು ಪರಿಚಯಿಸುತ್ತಾ ಕುರುಡ ಈ ಮಾತನ್ನು ಹೇಳುವಾಗ ಅವನ ಅಂತರಂಗದಿಂದ ನೋಡುವ ಪರಿಯನ್ನು ಪರಿಚಯಿಸುತ್ತದೆ...


"ಇಲ್ಲ ನನಗೆ ನಂಬಿಕೆ ಇಲ್ಲ... ಯಾವುದರಲ್ಲೂ.."

ನಿರೂಪಕರ ಈ ಗುಣ ಒಳ್ಳೆಯದಲ್ಲ.. ಇದರಿಂದ ಹೊರಬರುವುದು ಹೇಗೆ..ಎಂಬುದನ್ನ್ನು ಕುರುಡ ಕಥೆಯ ಕೊನೆಯಲ್ಲಿ ಚಿತ್ರ ಬಿಡಿಸುತ್ತಾ "ನಿನ್ನಿಂದ ಎಲ್ಲಾ ಸಾಧ್ಯ" ಎಂಬುದನ್ನು ಹೇಳಬಯಸುತ್ತಾನೆ..


"ಕೆಲವು ಮನುಷ್ಯರನ್ನೂ ಬಿಡಿಸು.. ಮನುಷ್ಯರಿಲ್ಲದೆ ಎಂತಹ ಕೆಥೆಡ್ರೆಲ್ ಅದು"

ಮಾನವರಿಲ್ಲದ ಜಾಗ ಎಂತಹ ಜಾಗವಾಗಿದ್ದರೂ ಚೆನ್ನಾಗನಿಸುವುದಿಲ್ಲಾ.. ಏಕಾಂತ ಕೆಲಸಮಯ ಮನಸ್ಸಿಗೆ ಹಿತ ಕೊದಬಹುದು.. ಆದರೆ ಮಾನವ ಸಂಬಂಧ ಸದಾ ಖುಷಿ ಕೊಡುವ ಕ್ರಿಯೆ.. ವಿಶ್ವಾಸ ನಂಬಿಕೆಗಳ ಮೇಳೆಯೇ ನಿಂತಿರುವ ನಮ್ಮ ಮೌಲ್ಯಗಳಿಗೆ ಪೂರಕವಾಗಿದೆ ಈ ವಾಕ್ಯ...


ಬಾಳಿಗರ ಸಾಹಿತ್ಯದ ಶೈಲಿ ಸ್ವಲ್ಪ ಹೊಸದಾಗಿತ್ತು...ಅನುವಾದವನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ.. ಅಭಿನಂದನೆಗಳು...

ನೀವೂ ಓದಿ...